ತುಮಕೂರು

ಆಪರೇಷನ್ ಸಿಂಧೂರದ ಬಗ್ಗೆ‌ ಮಾತಾಡಿದವರಿಗೆ ಅಯೋಗ್ಯ ಎಂದ ವಿಜಯೇಂದ್ರ

ತುಮಕೂರು:- ಇಂತಹ ಸಂದರ್ಭದಲ್ಲಿ ದೇಶದ ಪರ ನಿಲ್ಲಬೇಕಾಗುತ್ತದೆ, ದೇಶ ದ್ರೋಹದ ಕೆಲಸ ಮಾಡಬಾರದು.
ಕೊತ್ತೂರು ಮಂಜುನಾಥ್ ಇರಬಹುದು, ಕಾಂಗ್ರೆಸ್ ನವರು ಇರಬಹುದು, ಯಾರೇ ಇರಬಹುದು, ದೇಶದ ವಿರುದ್ಧ ಹೇಳಿಕೆ ಕೊಡಬಾರದು. ಪಾಕಿಸ್ತಾನದ ಪರವಾಗಿಯೂ ಹೇಳಿಕೆ ಕೊಡಬಾರದು. ಆ ಅಯೋಗ್ಯರು ಕೆಲವರು ಆ ರೀತಿ ಹೇಳಿಕೆ ಕೊಡ್ತಿದ್ದಾರೆ. ಅವರನ್ನ ಆ ಪಕ್ಷದ ಮುಖಂಡರು ಗಮನಿಸಬೇಕು ಎಂದು ಹೇಳುವ ಮೂಲಕ ಆಪರೇಷನ್ ಸಿಂಧೂರದ ಬಗ್ಗೆ‌ ಮಾತಾಡಿದವರಿಗೆ ಅಯೋಗ್ಯ ಎಂದು ಹೇಳುವ ಮೂಲಕ ಟಾಂಗ್ ಕೊಟ್ಟಿದ್ದರು. ತಿರಂಗ ಯಾತ್ರೆ ಇಡೀ ದೇಶಾದ್ಯಂತ ಯಶಸ್ವಿಯಾಗಿ ನಡೆಯುತ್ತಿದೆ.‌ ದೊಡ್ಡ ಸಂಖ್ಯೆಯಲ್ಲಿ ನಾಗರೀಕರು, ದೇಶಭಕ್ತರು ತಿರಂಗ ಯಾತ್ರೆಯಲ್ಲಿ ಭಾಗವಹಿಸಿ ತಿರಂಗ ಯಾತ್ರೆ ಯಶಸ್ವಿಯಾಗಿದೆ ಎಂದು ಬಿಜೆಪಿ ರಾಜ್ಯಾದ್ಯಕ್ಷರಾದ ವಿಜಯೇಂದ್ರ ಹೇಳಿದರು.

ರಾಜಕೀಯ ಕಾರಣಕ್ಕಾಗಿ ಈ ಯಾತ್ರೆ ನಡೆಯುತ್ತಿಲ್ಲ, ದೇಶದ ಜನರಲ್ಲಿ ಜಾಗೃತಿ ಮೂಡಿಸುವುದು, ಆಪರೇಷನ್ ಸಿಂಧೂರದಲ್ಕಿ ಪಾಲ್ಗೊಂಡ ಸೈನಿಕರಿಗೆ ನೈತಿಕ ಬೆಂಬಲ ಹಾಗೂ ಅಭಿನಂದನೆ ಸಲ್ಲಿಸುವುದಾಗಿದೆ. ಎಲ್ಲಾ ಮುಖಂಡರು ಸೇರಿ ತಿರಂಗ ಯಾತ್ರೆಯನ್ನು ಯಶಸ್ವಿಗೊಳಿಸಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಎನ್ನುವರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ವಿಧಾನಸೌಧದೊಳಗೆ ಪಾಕಿಸ್ತಾನ ಜಿಂದಾಬಾದ್ ಕೂಗುವ ದೇಶ ದ್ರೋಹಿಗಳು ನಮ್ಮ ರಾಜ್ಯದಲ್ಲೂ ಇದ್ದಾರೆ, ದೇಶದಲ್ಲೂ ಇದ್ದಾರೆ. ಅಂತಹವರನ್ನು ಹುಡುಕುವ ಕೆಲಸ ಆಗಬೇಕಾಗಿದೆ. ನರೇಂದ್ರ ಮೋದಿ ಜೀ ಅವರು ಆ ಕೆಲಸ ಮಾಡ್ತಾರೆ. ತಿರಂಗಯಾತ್ರೆಯಲ್ಲಿ ಬಿಜೆಪಿ ಬಾವುಟ ಕಾಣಲ್ಲ. ಪಕ್ಷಕ್ಕೆ ಸೀಮಿತವಾಗದೆ, ರಾಜಕೀಯೇತರವಾಗಿ ಸಮಾಜ‌ದ ಎಲ್ಲಾ ವರ್ಗದವನ್ನ ಮುಂಚೂಣಿಯಲ್ಲಿ ಕರೆದುಕೊಂಡು ತಿರಂಗ ಯಾತ್ರೆ ಮಾಡ್ತಿದ್ದೇವೆ. ಯಾತ್ರೆಯಲ್ಲಿ ರಾಜಕೀಯ ತಂತ್ರ, ಕುತಂತ್ರಗಳಿಲ್ಲ ಎಂದು ಬಿ.ವೈ ವಿಜಯೇಂದ್ರ ಹೇಳಿದ್ದಾರೆ.