Uncategorized

ನಾಳೆ 103 ಅಮೃತ ರೈಲು ನಿಲ್ದಾಣ ಉದ್ಘಾಟನೆಯಾಗಲಿದೆ

ರಾಜಸ್ಥಾನ:- ಮುನಿರಾಬಾದ್‌, ಬಾಗಲಕೋಟೆ, ಗದಗ, ಗೋಕಾಕ್‌ ರಸ್ತೆ, ಧಾರವಾಡದ 5 ರೈಲು ನಿಲ್ದಾಣಗಳು ಸೇರಿದಂತೆ ನಾಳೆ 103 ಅಮೃತ ರೈಲು ನಿಲ್ದಾಣಗಳು ಉದ್ಘಾಟನೆಯಾಗಲಿದೆ.

ನಾಳೆ ನಡೆಯಲಿರುವ ರಾಜಸ್ಥಾನದ ಬಿಕನೇರ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದೇಶದ 103 ಅಮೃತ ರೈಲ್ವೆ ನಿಲ್ದಾಣಗಳನ್ನು ಸಾರ್ವಜನಕರ ಸೇವೆಗೆ ಪ್ರಧಾನಿ ಮೋದಿ ಸಮರ್ಪಣೆ ಮಾಡಲಿದ್ದಾರೆ.

ದೇಶದ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 86 ಜಿಲ್ಲೆಗಳಲ್ಲಿರುವ 103 ಅಮೃತ ನಿಲ್ದಾಣಗಳನ್ನು ರೂ.1,100 ಕೋಟಿಗಳಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಅಮೃತ ಭಾರತ ನಿಲ್ದಾಣ ಯೋಜನೆ(ಎಬಿಎಸ್‌‍ಎಸ್‌‍) ಅಡಿಯಲ್ಲಿ ಪ್ರಾದೇಶಿಕ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸಲು ಮತ್ತು ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸಲು 1,300ಕ್ಕೂ ಹೆಚ್ಚು ನಿಲ್ದಾಣಗಳನ್ನು ಆಧುನಿಕ ಸೌಲಭ್ಯಗಳೊಂದಿಗೆ ಪುನರಾಭಿವೃದ್ಧಿ ಮಾಡಲಾಗುತ್ತಿದೆ.

ಭಾರತದಾದ್ಯಂತ ಪುನರಾಭಿವೃದ್ಧಿ ಮಾಡಲಾದ ಅಮೃತ ನಿಲ್ದಾಣಗಳು ಆಧುನಿಕ ಮೂಲಸೌಕರ್ಯವನ್ನು ಸಾಂಸ್ಕೃತಿಕ ಪರಂಪರೆಯೊಂದಿಗೆ ಸಂಯೋಜಿಸುತ್ತವೆ. ದಿವ್ಯಾಂಗ ಸ್ನೇಹಿ ಸೌಲಭ್ಯಗಳು ಸೇರಿದಂತೆ ಪ್ರಯಾಣಿಕ ಕೇಂದ್ರಿತ ಸೌಲಭ್ಯಗಳು ಮತ್ತು ಪ್ರಯಾಣದ ಅನುಭವವನ್ನು ಹೆಚ್ಚಿಸಲು ಸುಸ್ಥಿರ ಅಭ್ಯಾಸಗಳನ್ನು ಒಳಗೊಂಡಿವೆ.

ಗದಗ ರೈಲು ನಿಲ್ದಾಣ:

ಎಬಿಎಸ್‌‍ಎಸ್‌‍ ಅಡಿಯಲ್ಲಿ 23.24 ಕೋಟಿ ರೂ. ವೆಚ್ಚದಲ್ಲಿ ಗದಗ ರೈಲು ನಿಲ್ದಾಣದ ಪುನರಾಭಿವೃದ್ಧಿ ಪೂರ್ಣಗೊಂಡಿದೆ.

ಧಾರವಾಡ ರೈಲು ನಿಲ್ದಾಣ:

ಎಬಿಎಸ್‌‍ಎಸ್‌‍ ಅಡಿಯಲ್ಲಿ ಧಾರವಾಡ ರೈಲು ನಿಲ್ದಾಣದ ಪುನರಾಭಿವೃದ್ಧಿ 17.1 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡಿದೆ.

ಬಾಗಲಕೋಟೆ ರೈಲು ನಿಲ್ದಾಣ:

ಅಮೃತ ಭಾರತ ನಿಲ್ದಾಣ ಯೋಜನೆಯಡಿ 16.06 ಕೋಟಿ ರೂ. ವೆಚ್ಚದಲ್ಲಿ ಬಾಗಲಕೋಟೆ ರೈಲು ನಿಲ್ದಾಣದ ಪುನರಾಭಿವೃದ್ಧಿ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಮುನಿರಾಬಾದ್‌ ರೈಲು ನಿಲ್ದಾಣ:

ಮುನಿರಾಬಾದ್‌ ರೈಲು ನಿಲ್ದಾಣದ ಪುನರಾಭಿವೃದ್ಧಿಯನ್ನು ಎಬಿಎಸ್‌‍ಎಸ್‌‍ ಅಡಿಯಲ್ಲಿ 18.40 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ.

ಗೋಕಾಕ್‌ ರಸ್ತೆ ರೈಲು ನಿಲ್ದಾಣ:

ಅಮೃತ ಭಾರತ ನಿಲ್ದಾಣ ಯೋಜನೆಯಡಿ 16.98 ಕೋಟಿ ರೂ. ವೆಚ್ಚದಲ್ಲಿ ಗೋಕಾಕ್‌ ರಸ್ತೆ ರೈಲು ನಿಲ್ದಾಣದ ಪುನರಾಭಿವೃದ್ಧಿ ಯಶಸ್ವಿಯಾಗಿ ಪೂರ್ಣಗೊಂಡಿದೆ.