ಚಿಕ್ಕಮಗಳೂರು

ಪಿ.ಆರ್ ಸದಾಶಿವರವರ ಷಷ್ಠಿಪೂರ್ತಿ ಸಮಾರಂಭದಲ್ಲಿ ಗಣ್ಯಾಥಿಗಣ್ಯರು

ಚಿಕ್ಕಮಗಳೂರು:- ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಮುತ್ತಿನಕೊಪ್ಪ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು, ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಸದಸ್ಯರಾದ ಸದಾಶಿವರವರ ಷಷ್ಠಿಪೂರ್ತಿ ಸಮಾರಂಭವು(60ನೇ ಹುಟ್ಟುಹಬ್ಬ) ಇಂದು ಬಿ.ಹೆಚ್.ಕೈಮರದ ನಾರಾಯಣ ಗುರು ಸಭ ಭವನದಲ್ಲಿ ಕುಟುಂಬದ ಸದಸ್ಯರೊಂದಿಗೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶೃಂಗೇರಿ ವಿಧಾನ ಸಭಾ ಕ್ಷೇತ್ರದ ಶಾಸಕರ ಧರ್ಮ ಪತ್ನಿ ಪುಷ್ಪಾ ರಾಜೇಗೌಡ ಸೇರಿದಂತೆ ಗಣ್ಯಾಥಿಗಣ್ಯರಾದ ಕಾಡಾ ಅಧ್ಯಕ್ಷರಾದ ಡಾ.ಅಂಶುಮಂತ್ ಗೌಡ, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ, ಜಿ.ಪಂ ಮಾಜಿ ಅಧ್ಯಕ್ಷರಾದ ಪಿ.ಜೆ.ಅಂಟೋನಿ, ಕಾಂಗ್ರೆಸ್ ಕಿಸಾನ್ ಮಜ್ದೂರ್ ಘಟಕದ ಸಚಿನ್ ಮೀಗಾ ಸದಾಶಿವರವರ ಸಹೋದರ ಪಟ್ಟಣ ಪಂಚಾಯಿತಿ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಕುಮಾರ್ ರವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video