Uncategorized

ಮುಂಬೈಯಲ್ಲಿ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತ

ಮುಂಬೈ:- ಶುಕ್ರವಾರ ಪೂರ್ತಿ ದಿನ ಮುಂಬೈನಲ್ಲಿ ಭಾರೀ ಮಳೆಯಾಗಿದ್ದು, ನಗರದ ವಿವಿಧ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೊಂಕಣ ಕರಾವಳಿಯಲ್ಲಿ ಮಾನ್ಸೂನ್ ಸಕ್ರಿಯವಾಗಿರುವುದರಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಈ ಹಿಂದೆ ಮುಂಬೈ, ನವಿ ಮುಂಬೈ ಮತ್ತು ಥಾಣೆಗೆ ಎಚ್ಚರಿಕೆ ನೀಡಿತ್ತು.

ಗುರುವಾರ ತಡರಾತ್ರಿ ನಗರದಲ್ಲಿ ಮಳೆ ಸುರಿಯಲು ಪ್ರಾರಂಭಿಸಿ ಶುಕ್ರವಾರವೂ ಮುಂದುವರೆದಿದ್ದು, ದಕ್ಷಿಣ ಮುಂಬೈ ಮತ್ತು ಪಶ್ಚಿಮ ಉಪನಗರಗಳ ಮೇಲೆ ಪರಿಣಾಮ ಬೀರಿತು. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT), ಚರ್ಚ್ಗೇಟ್, ದಾದರ್, ದಹಿಸರ್, ಬೋರಿವಲಿ, ಕಾಂದಿವಲಿ, ಮಲಾಡ್, ಗೋರೆಗಾಂವ್, ಜೋಗೇಶ್ವರಿ ಮತ್ತು ಅಂಧೇರಿ ಮುಂತಾದ ಪ್ರದೇಶಗಳು ಹೆಚ್ಚು ಹಾನಿಗೊಳಗಾದವು.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video