ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ಅವರ ಜಾಮೀನು ರದ್ದಾಗಿದ್ದು, ಅವರು ಇಂದು ಪೊಲೀಸರು ಬಂಧಿಸಿದ್ದಾರೆ. ಈ ಸಮಯದಲ್ಲಿ ಪವಿತ್ರಾ ಪೊಲೀಸರಿಗೆ ಅವಾಜ್ ಹಾಕಿರುವ ವಿಚಾರ ಬೆಳಕಿಗೆ ಬಂದಿದೆ.
ಸುಪ್ರೀಂಕೋರ್ಟ್ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನ ರದ್ದು ಮಾಡಿದೆ. ಹಾಗಾಗಿ ಪವಿತ್ರಾ ಗೌಡ ಅವರನ್ನ ಪೊಲೀಸರು ಇಂದು ಬಂಧಿಸಿ, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಪವಿತ್ರಾ ಅವರನ್ನ ಅರೆಸ್ಟ್ ಮಾಡಿ ಕರೆದುಕೊಂಡು ಹೋಗುವಾಗ ಪೊಲೀಸರಿಗೆ ಆವಾಜ್ ಹಾಕಿದ್ದಾರೆ ಎನ್ನಲಾಗಿದೆ. ಪವಿತ್ರಾ ಅವರನ್ನ ಕರೆದುಕೊಂಡು ಪೊಲೀಸರು ಕೆಳಗೆ ಹೋಗುವಾಗ ಅವರ ಜೊತೆ ಲಾಯರ್ ಸಹ ಇದ್ದರು. ಈ ಸಮಯದಲ್ಲಿ ಅವರ ಲಾಯರ್ ಎಡವಿದ್ದಾರೆ. ಇದರಿಂದ ಪವಿತ್ರಾ ಅವರಿಗೆ ಸಿಟ್ಟು ಬಂದಿದು, ಯಾಕೆ ಈ ರೀತಿ ತಳ್ಳುತ್ತೀರಿ, ಮೊಬೈಲ್ ಬಿಡಿ ಮೊದಲು. ಸರಿಯಾಗಿ ಕರೆದುಕೊಂಡು ಅಂತ ತಲೆ ಚಚ್ಚಿಕೊಂಡ ಹಾಗೆ ಮಾಡಿದ್ದಾಋಎ. ಇದಿಷ್ಟೇ ಅಲ್ಲದೇ, ಅಲ್ಲಿಂದ ಮಹಿಳಾ ಸಿಬ್ಬಂದಿ ಮೇಲೆ ಸಹ ಸಿಟ್ಟಾಗಿದ್ದಾರೆ. ಈ ಸಮಯದಲ್ಲಿ ಮಹಿಳಾ ಸಿಬ್ಬಂದಿ ಅವರನ್ನ ಮುಂದಕ್ಕೆ ಹೋಗಿ ಎಂದು ಕಳುಹಿಸಿದ್ದಾರೆ.
Leave feedback about this