ಬೆಂಗಳೂರು

ಡಿಕೆಶಿ ಉರುಳಿಸುತ್ತಿರುವ ಹೊಸ ದಾಳಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಕಕ್ಕಾಬಿಕ್ಕಿ

ಬೆಂಗಳೂರು:- ಕರ್ನಾಟಕದಲ್ಲಿ ಸಿಎಂ ಪಟ್ಟಕ್ಕಾಗಿ ನಡೆಯುತ್ತಿರುವ ಶೀತಲ ಸಮರ ಸದ್ಯಕ್ಕೆ ಮುಗಿಯೋ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇತ್ತೀಚೆಗೆ ದಿಲ್ಲಿ – ಬೆಂಗಳೂರಲ್ಲಿ ಬಹಳಷ್ಟು ಬೆಳವಣಿಗೆಗಳ ಬಳಿಕ ಸಿಎಂ ಬದಲಾವಣೆ ಕೂಗು ಸ್ವಲ್ಪ ತಣ್ಣಗಾಗಿತ್ತು. ಆದರೆ, ರಾಜ್ಯ ಕಾಂಗ್ರೆಸ್‌ಲ್ಲಿ ನವೆಂಬರ್‌ ಕ್ರಾಂತಿಗೆ ಸದ್ದಿಲ್ಲದೇ ವೇದಿಕೆ ನಿರ್ಮಾಣ ಆಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಡಿಸಿಎಂ ಡಿ.ಕೆ ಶಿವಕುಮಾರ್‌ ಹೊಸ ದಾಳ ಉರುಳಿಸುತ್ತಿದ್ದಾರೆ.

ಸರ್ಕಾರ ರಚನೆ ಸಮಯದಲ್ಲಾಗಿದೆ ಎನ್ನಲಾದ ಅಧಿಕಾರ ಹಂಚಿಕೆ ಒಪ್ಪಂದದಂತೆ ನವೆಂಬರ್‌ನಲ್ಲಿ ಡಿಕೆಶಿ ಅವರನ್ನು ಸಿಎಂ ಮಾಡಲು ಅವರ ನಿಷ್ಠಾವಂತರು ಹೊಸ ರಾಜಕೀಯ ಸಮೀಕರಣಕ್ಕೆ ಮುಂದಾಗಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ನವೆಂಬರ್‌ನಲ್ಲಿ ಸಿಎಂ ಬದಲಾಗ್ತಾರಾ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ. ಡಿ.ಕೆ ಶಿವಕುಮಾರ್‌ ಉರುಳಿಸುತ್ತಿರುವ ಹೊಸ ದಾಳಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಕಕ್ಕಾಬಿಕ್ಕಿಯಾಗಿದ್ದು, ಯಾರ ಪರ ನಿಲ್ಲಬೇಕು ಎನ್ನುವ ಜಿಜ್ಞಾಸೆಯಲ್ಲಿ ಮುಳುಗಿದಂತೆ ಕಾಣುತ್ತಿದೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video